ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸಿದ ನಂತರ ಇಬ್ಬರು ಅಪರಿಚಿತರ ನಡುವಿನ ಸಂಬಂಧ ಸ್ವಯಂಚಾಲಿತವಾಗಿ ಸರಿಯಾದ ದಿಕ್ಕಿನಲ್ಲಿ ನಡೆಯುತ್ತದೆ.
– ಮಾನವ ಗುರು ಶ್ರೀ ಚಂದ್ರಶೇಖರ ಗುರೂಜಿ
ವಿವಾಹದಲ್ಲಿ ಯಶಸ್ಸು ಎಂದರೆ ಇಬ್ಬರು ಅಪರಿಚಿತ ವ್ಯಕ್ತಿಗಳನ್ನು ಒಂದು ಮಾಡುವುದು, ಹಾಗೂ ಮುಂದೆ ಅವರು ಸಂಬಂಧಗಳಲ್ಲಿ ಅನ್ಯೋನ್ಯತೆ ಬೆಳೆಸಿ ಕಾಪಾಡಿಕೊಂಡು ಜೊತೆಯಲ್ಲಿ ವಾಸಿಸುವುದು, ಇಂಥಹ ಸಂಬಂಧಗಳಲ್ಲಿ ದೀರ್ಘಕಾಲದಲ್ಲಿ ಅನ್ಯೋನ್ಯತೆಯಿಂದ ಇರುವಂತೆ ಮಾಡಲು ಹೃತ್ಪೂರಕವಾಗಿ ಪಾಲ್ಗೊಳ್ಳುವ ಅಗತ್ಯವಿದೆ.
ವೈವಾಹಿಕ ಜೀವನ ಸುಲಭವಾಗಿರುವುದಿಲ್ಲ ಹಾಗೂ ಪ್ರತಿದಿನ ಸಂತೋಷದಿಂದ ಕೂಡಿರುವುದಿಲ್ಲ, ಮತ್ತು ಸಂಬಂಧಗಳಲ್ಲಿ ಖಂಡಿತವಾಗಿಯೂ ಸವಾಲುಗಳು ಎದುರಾಗುತ್ತವೆ ಯಾಕೆಂದರೆ ಕುಟುಂಬದಲ್ಲಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತೆ ಅಗ ಅವರ ನಡುವೆ ಮಾತುಕತೆ ನಡೆಸಬೇಕಾಗುತ್ತೆ, ಜೀವನವು ಯಾವತ್ತೂ ನಿರೀಕ್ಷೆ,ಒತ್ತಡದ ಸನ್ನಿವೇಶ, ಸಮಯ ಹಾಗೂ ಹಣದ ಬೇಡಿಕೆಗಳಿಂದ ಕೂಡಿರುತ್ತದೆ, ಇದು ದಂಪತಿಗಳ ನಡುವೆ ಉತ್ತಮ ತಿಳುವಳಿಕೆ ಮತ್ತು ರಾಜಿ ಮಾಡಿಕೊಳ್ಳಲು ಕರೆ ನೀಡುತ್ತದೆ
ಸಂತೋಷಮಯ ದಾಂಪತ್ಯದ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು?
- ಪ್ರೀತಿ ಮತ್ತು ಬದ್ಧತೆ – ಪ್ರೀತಿ ತಾತ್ಕಾಲಿಕವಾಗಿರಬಹುದು ಅದ್ರೆ ಸಂಬಂಧಗಳು ಹೆಚ್ಚು ಕಾಲ ಉಳಿಯುವುದಕ್ಕೆ ಬದ್ಧತೆ ಅಗತ್ಯ ಎಂಬುದು ಸತ್ಯವಾಗಿದೆ
- ನಿಷ್ಠೆ / ಪ್ರಾಮಾಣಿಕತೆ – ಇದು ಎಲ್ಲಾ ಹಂತಗಳಲ್ಲಿ ಮುಖ್ಯವಾಗಿದೆ, ನಿಷ್ಠೇಯಿಂದಿರುವುದು, ಆರ್ಥಿಕವಾಗಿ ಪ್ರಾಮಾಣಿಕರಾಗಿರುವುದು ಮತ್ತು ಪ್ರಾಮಾಣಿಕ ಸಂವಹನವನ್ನುಕಾಪಾಡಿಕೊಳ್ಳುವುದು.
- ಸಹನೆಯ ನಡವಳಿಕೆ, ಸ್ವೀಕಾರ ಮತ್ತು ಗೌರವ ಇತ್ಯಾದಿ – ಸಂಬಂಧದಲ್ಲಿನ ನ್ಯೂನತೆಗಳೊಂದಿಗೆ ಪಾಲುದಾರನನ್ನು ಒಪ್ಪಿಕೊಳ್ಳುವುದು ಮುಖ್ಯ ಹಾಗು ಸಂಬಂಧವನ್ನು ವ್ಯಕ್ತಿಗಿಂತಲೂ ಮೇಲೆ ಇರಿಸಬೇಕಾಗುವುದು
- ಸಮಯ – ಸಂಬಂಧಗಳನ್ನು ಬೆಳೆಸಲು ಗುಣಮಟ್ಟದ ಸಮಯವು ಸಹಾಯ ಮಾಡುತ್ತದೆ, ಇದು ಅತ್ಯುತ್ತಮ ತಂತ್ರವಾಗಿದೆ
- ಪ್ರಾಮಾಣಿಕತೆ ಮತ್ತು ನಂಬಿಕೆ – ಇದನ್ನು ಅಳವಡಿಸಿಕೊಂಡರೇ ಒಳ್ಳೆಯ ಫಲಿತಾಂಶ ಕಾದಿರುತ್ತದೆ
- ಸಂವಹನ – ದಿನಸಿ ಪಟ್ಟಿ ಸೇರಿದಂತೆ ಎಲ್ಲವನ್ನು ಚರ್ಚಿಸಿ, ಇದರಿಂದ ಅಸಮಾಧಾನ ದೂರ ಆಗುವುದು, ಭಾವನೆಗಳು, ಅನುಮಾನಗಳು, ಭಯಗಳು, ಅಲೋಚನೆಗಳು, ನಂಬಿಕೆಗಳು, ಮೌಲ್ಯಗಳು, ಭರವಸೆಗಳು, ಚಿಂತೆಗಳು, ಕನಸುಗಳು, ಮಹಾತ್ವಕಾಂಕ್ಷೆ ಮುಂತಾದವುಗಳಿಗೆ ಮನಸ್ಸನ್ನು ತೆರೆದಿಡಿ.
- ಸ್ವಾರ್ಥರಹಿತ – ಒಟ್ಟಿಗೆ ಕನಸು ಕಾಣುವುದು, ಭರವಸೆಗಳನ್ನು ನೀಡುವುದು, ಕಾಳಜಿಯನ್ನು ಹಂಚಿಕೊಳ್ಳುವುದು ಮತ್ತು ಪೂರ್ಣ ಮತ್ತು ಪ್ರಗತಿಪರ ಜೀವನ ನಡೆಸಲು ಪ್ರಯತ್ನಿಸಿ, ಇಷ್ಟೇ ಅಲ್ಲದೇ ಪ್ರಚೋದಕಗಳನ್ನು ಗುರುತಿಸಿ ಮತ್ತೆ ಕೆಲಸ ಪುನಃ ಮಾಡುವುದು
- ಸಕ್ರಿಯ ಅಲಿಸುವಂತಹ ಕೌಶಲ್ಯ – ನಿರ್ಲಕ್ಷಿಸುವ , ಒಪ್ಪದಿರುವ, ನಿರ್ಣಯಿಸುವ, ದೂಷಿಸುವ ಬದಲು ಭಾವನಾತ್ಕಕವಾಗಿ ನಿಕಟತೆಗಾಗಿ ಹತ್ತಿರವಾಗುವುದು, ಸಂವಹನ ಮಾಡುವುದು ,ದೂಷಿಸುವುದಕ್ಕಿಂತ ಹೆಚ್ಚಾಗಿ ತಿಳಿದುಕೊಳ್ಳುವುದು
ಸರಿಯಾದ ವಿವಾಹವು ನಡವಳಿಕೆಗಳು, ಅಲೋಚನಾ ಪ್ರಕ್ರಿಯೆ ಮತ್ತು ಜೀವನ ಶೈಲಿಯ ಬದಲಾವಣೆಗಳ ಹೊರತಾಗಿಯೂ ಒಂದಿಷ್ಟು ಮೂಲ ಭೂತ ಬದಲಾವಣೆಗಳನ್ನು ಬಯಸುತ್ತೆ, ಅದಕ್ಕೆ ಸಕರಾತ್ಮಕ ಸಂವಹನ, ಪರಸ್ಪರ ಗೌರವ ಮತ್ತು ಒಟ್ಟಿಗೆ ಜೀವನವನ್ನು ಕಳೆಯುವ ಬದ್ಧತೆಯನ್ನು ಸಹ ಬಯಸುತ್ತದೆ, ಇದು ಯಾವುದೇ ಭಾವನಾತ್ಮಕ ಗೊಂದಲಗಳಿಗೆ ಅವಕಾಶ ನೀಡದೆ ಸರಳ ಸಂಬಂಧಗಳ ಬಾಂಧವ್ಯದತ್ತ ಪರಿಣಾಮಕಾರಿಯಾಗಿ ಕೆಲಸ ಮಾಡುವುದು.
ಯಶಸ್ವಿ ದಂಪತ್ಯವನ್ನು ಉಳಿಸಿಕೊಳ್ಳುವ ಅಂಶವನ್ನು ನೀವು ಓದಿದ್ದೀರಿ ಎಂದು ಭಾವಿಸುತ್ತೇನೆ, ಮೇಲಿನ ಎಲ್ಲ ಪರಿಹಾರಗಳನ್ನು ದಿನದಿಂದ ದಿನಕ್ಕೆ ನಿರ್ವಹಿಸುವುದು ಅಷ್ಟು ಸುಲಭ ಎಂದು ನೀವು ಭಾವಿಸುತ್ತೀರಾ? ಕೆಲವೊಂದು ಪುಸ್ತಕದಲ್ಲಿ ಹಲವಾರು ಲೇಖಕರು ಸಹಿತ ಅವುಗಳನ್ನೇ ಪುನಃ ಪುನಃ ತಿಳಿಸಿದ್ದಾರೆ, ಮದುವೆ ಸಮಸ್ಯೆ ಪರಿಹಾರಕ್ಕೆ ಪ್ರಪಂಚದಾದ್ಯಂತ ತಲೆಮಾರಿನವರು ಒಂದೆರಡು ಗುರಿಗಳನ್ನು ಹೊಂದಿಕೊಂಡು ಈ ಎಲ್ಲಾ ಅಂಶಗಳನ್ನು ಪಾಲಿಸಿಕೊಂಡು ಬಂದಿದ್ದಾರೆ, ಆದರೂ ಅವರು ಸಮಸ್ಯೆಯ ವಿರುದ್ದ ಹೊರಾಟದ ಅನುಭವ ಅನುಭವಿಸಿದ್ದಾರೆ.
ಸಂತೋಷಮಯ ದಾಪಂತ್ಯಕ್ಕೆ ಪರಿಹಾರಗಳನ್ನು ಒತ್ತಾಯಪೂರ್ವಕವಾಗಿ ಮಾಡುವುದಕ್ಕೆ ಆಗುವುದಿಲ್ಲ ಏಕೇಂದರೇ ಪ್ರತಿಯೊಂದು ಅಂಶವು ತನ್ನದೇ ಆದ ಕಾಲಮಿತಿಯನ್ನು ಹೊಂದಿರುತ್ತದೆ ಪತಿ ಮತ್ತು ಪತ್ನಿ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾದಾಗ ಮನಸ್ಸು ದೈನಂದಿನ ಚಟುವಟಿಕೆಯ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ, ಉದಾಹರಣೆಗೆ : ಓರ್ವ ವೈದ್ಯರಿಗೆ ಅವರ ಮದುವೆಯಲ್ಲಿ ಸ್ವಲ್ಪ ತೊಂದರೆಯಾಗಿದ್ದರು ಸಹಿತ ಕೆಲವೊಮ್ಮೆ ಅವರು ಪ್ರಮುಖವಾಗಿ ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಹಾಜರಾಗಬೇಕಾಗುತ್ತದೆ ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಏಕಾಗ್ರತೆ ಹಾಗು ಗಮನ ಇರಬೇಕಾದ ಸಮಯದಲ್ಲಿ ಮನಸ್ಥಿತಿಯು ಬೇಸರವಾಗಿದ್ದು ಶಕ್ತಿಯೂ ಕಡಿಮೆಯಾಗಿರುತ್ತೆ.
ಜೀವನವು ಅನಿರೀಕ್ಷಿತತೆಯೊಂದಿಗೆ ಕೂಡಿದ್ದು ಮತ್ತು ದೈನಂದಿನ ಜೀವನ ಮತ್ತು ಅದರ ಸವಾಲುಗಳು ಹಾದಿಯಲ್ಲಿ ಬರುತ್ತವೆ ಮತ್ತು ಪರಸ್ಪರ ಮೀರಿ ಸಂಬಂಧದ ಪರವಾಗಿ ವಹಿಸುವ ಕಾಳಜಿ ಕೆಲವೊಮ್ಮೆ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ .
ದಂಪತಿಗಳು ತಮ್ಮ ನಡವಳಿಕೆಯ ಮೂಲ ಕಾರಣವನ್ನು ಅರ್ಥಮಾಡಿಕೊಳ್ಳುವುದು ಮುಂದಿನ ಅತ್ಯುತ್ತಮ ವಿಧಾನವಾಗಿದೆ.
ಮಾನವ ಗುರುವಿನ ಪ್ರಕಾರ ವಿಶ್ವಶಕ್ತಿಯೊಂದಿಗೆ ಮನಸ್ಸು, ದೇಹ ಮತ್ತು ಸುತ್ತಮುತ್ತಲಿನ ಸ್ಥಳಗಳು ಸಂಪರ್ಕ ಕಡಿತಗೊಂಡಿರುವುದೇ ಮದುವೆಗಳಲ್ಲಿನ ಸಮಸ್ಯೆಗೆ ಮೂಲ ಕಾರಣ.
2000ನೇ ಇಸವಿಯಲ್ಲಿ ಮಾನವ ಗುರು ಅವರು ದಿವ್ಯ ಜ್ಞಾನವನ್ನು ಅವಿಷ್ಕಾರಿಸಿದ್ದಾರೆ, ಇದು ವಿಶ್ವಶಕ್ತಿಯ ಜೊತೆ ಸಂಪರ್ಕ ಸಾಧಿಸಿ ಯಶಸ್ವಿ ದಾಂಪತ್ಯದ ಜೀವನಕ್ಕೆ ಮಾರ್ಗವನ್ನು ಕಲ್ಪಿಸಿಕೊಡುತ್ತೆ.
ಸಂಬಂಧಗಳ ಬಗ್ಗೆ ನೋಡುವಾಗ ಕೇವಲ ಮನಸ್ಸು ಮತ್ತು ದೇಹಕ್ಕೆ ಮಾತ್ರ ಚಿಕಿತ್ಸೆ ಮಾಡುವುದು ಮತ್ತು ಸುತ್ತಮುತ್ತಲಿನ ಸ್ಥಳಗಳನ್ನು ಹಾಗೂ ವಿಶ್ವಶಕ್ತಿಯನ್ನು ನಿರ್ಲಕ್ಷಿಸುವುದು ಸಂತೋಷಮಯ ದಾಂಪತ್ಯ ಜೀವನಕ್ಕೆ ಎಂದೂ ಕೂಡ ಸಹಾಯವಾಗುವುದಿಲ್ಲ.
ಅದರೇ ಶಾಶ್ವತವಾಗಿ ಮದುವೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಮತ್ತು ದಂಪತಿಗಳ ನಡುವೆ ಸಾಮರಸ್ಯ ಸಂಬಂಧ ವೃದ್ಧಿಸಲು ಈ ಮೂರು ಅಂದರೇ ದೇಹ, ಸುತ್ತಮುತ್ತಲಿನ ಸ್ಥಳ ಮತ್ತು ವಿಶ್ವಶಕ್ತಿ ಸಂಪರ್ಕಗೊಳ್ಳಬೇಕು, ಅದರೇ ಈ ಮೂರು ಸ್ವತಂತ್ರ ಘಟಕಗಳ ನಡುವೆ ಸಿಂಕ್ರೊನೈಸೇಶನ್ ಇರುವವರೆಗೂ ಅವು ಒಂದಾಗಲು ಸಾಧ್ಯವಿಲ್ಲ.
ಸಂಪರ್ಕಿಸಿದಾಗ, ತಮ್ಮ ಜೀವನದಲ್ಲಿ ಈ ವಿಧಾನವು ಮಾಡಿದ ಪ್ರಭಾವ ಇಷ್ಟು ಶೀಘ್ರವಾಗಿ ದೊರಕಿದ ಬಗ್ಗೆ ದಂಪತಿಗಳು ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಮಾನವ ಗುರುವಿನ ದಿವ್ಯ ಜ್ಞಾನವು ವೈಜ್ಞಾನಿಕವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ?
- ಪ್ರತಿಯೊಬ್ಬ ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವಂತಹ ಶಕ್ತಿಯೂ ತನ್ನದೇ ಆದ ಕಂಪನವನ್ನು ಹೊಂದಿರುತ್ತದೆ
- ಪ್ರತಿಯೊಬ್ಬ ವ್ಯಕ್ತಿ ವಾಸಿಸುವ / ಕೆಲಸ ಮಾಡುವ ಸ್ಥಳವು ಅದರ ಶಕ್ತಿ ಮತ್ತು ತನ್ನದೇ ಆದ ಕಂಪನವನ್ನು ಹೊಂದಿರುತ್ತದೆ
- ಇದರಂತೆಯೇ ವಿಶ್ವಶಕ್ತಿಯೂ ಸಹಿತ ತನ್ನದೇ ಆದ ಕಂಪನವನ್ನು ಹೊಂದಿರುತ್ತದೆ
ಯಾವಾಗ ದಂಪತಿಗಳು, ಅವರು ವಾಸಿಸುವ / ಕೆಲಸ ಮಾಡುವ ಸ್ಥಳವನ್ನು ಆಯಾ ಕಂಪನದ ತರಂಗಗಳ ಮೂಲಕ ವಿಶ್ವ ಶಕ್ತಿಯೊಂದಿಗೆ ಸಂಪರ್ಕಿಸಿದ ನಂತರ ವಿಶ್ವ ಶಕ್ತಿಯು ದೇಹಕ್ಕೆ ಸ್ವಯಂಚಾಲಿತವಾಗಿ ಸರಬರಾಜು ಆಗಲು ಪ್ರಾರಂಭವಾಗುತ್ತದೆ.
ವಿಶ್ವಶಕ್ತಿಯು ರಕ್ಷಕನಂತೆ ಕೆಲಸ ಮಾಡುತ್ತೆ, ಇಷ್ಟೇ ಅಲ್ಲದೇ ಮನಸ್ಸು ಮತ್ತು ದೇಹದ ಮೇಲೆ ನಿಯಂತ್ರಣವನ್ನು ಸಾಧಿಸುತ್ತದೆ, ಇದಾದ ನಂತರ ನಿಮ್ಮ ಮುಂದಿನ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತೆ, ಇಷ್ಟೇ ಅಲ್ಲದೇ ಕೇವಲ 9 ರಿಂದ 180 ದಿನಗಳಲ್ಲಿ ನೀವು ಸಮಸ್ಯೆಯಿಂದ ಹೊರ ಬರುವಂತಹ ಧನಾತ್ಮಕ ಬದಲಾವಣೆಯ ಅನುಭವವನ್ನು ಆರಂಭಿಸುತ್ತೀರಿ.
ಇದು ಪತಿ ಮತ್ತು ಪತ್ನಿ ತಪ್ಪುಗಳನ್ನು ಅರ್ಥ ಮಾಡಿಕೊಂಡು ತಮ್ಮ ಸಮಸ್ಯೆಗಳಿಗೆ ಮೂಲ ಕಾರಣವನ್ನು ತಿಳಿದುಕೊಂಡು ಅವುಗಳನ್ನು ಸರಿಪಡಿಸಿಕೊಂಡು ಬದುಕು ಸಾಗಿಸುವುದಕ್ಕೆ ಆರಂಭಿಸುತ್ತಾರೆ, ಇದರಿಂದ ಅವರಲ್ಲಿ ಪ್ರತಿಯೊಂದು ಸರಿಯಾಗಿದೆ ಎಂಬ ಧನಾತ್ಮಕ ಬದಲಾವಣೆ ಕಾಣಿಸಿ ಯಶಸ್ವಿ ಬದುಕು ಸಾಗಿಸುತ್ತಾರೆ.
ಈ ವಿಶ್ವಶಕ್ತಿಯೂ ದಂಪತಿಗಳಿಬ್ಬರಲ್ಲಿ ಶಾಂತತೆ, ಸ್ಪಷ್ಟತೆ ಮೂಡಿಸುತ್ತೆ ಇಷ್ಟೇ ಅಲ್ಲದೇ ಸಮಸ್ಯಗಳಿಗೆ ಒಂದಾಗಿ ಪರಿಹಾರವನ್ನು ಚರ್ಚಿಸಿ ಕಂಡುಕೊಳ್ಳುವ ವಾತವರಣವನ್ನು ಸೃಷ್ಠಿಸುತ್ತದೆ ಮತ್ತು ಭವಿಷ್ಯದ ಜೀವನದಲ್ಲಿ ಯಾವುದೇ ಹೆಚ್ಚಿನ ಅಡೆತಡೆಗಳು ಬರದಂತೆ ತಡೆಯುತ್ತದೆ, ಇದರಿಂದ ಜೀವನವು ಮುಂದಿನ ದಿನಗಳಲ್ಲಿ ಆನಂದಮಯದಿಂದ ನಡೆಯುತ್ತದೆ.
ಸಾರಂಶ : ಮದುವೆ ಎಂಬುದು ಬಹಳ ಪ್ರೀತಿಯ ಬಂಧನಗಳನ್ನು ದಂಪತಿಗಳ ನಡುವೆ ಉಂಟು ಮಾಡುತ್ತವೆ, ಒಂದು ವೇಳೆ ಪ್ರೀತಿಯ ಬಂಧನ ಸರಿಯಾಗಿಯಿಲ್ಲದಿದ್ದರೆ ಮನೆಯಲ್ಲಿ ನಕರಾತ್ಮಕ ವಾತಾವರಣ ಉಂಟಾಗುತ್ತದೆ.
ಮಾನವ ಗುರುವಿನಿಂದ ವೈಯಕ್ತಿಕರಿಸಿದ ಮಾರ್ಗದರ್ಶನವು ಮದುವೆಯಲ್ಲಿನ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರವಾಗಿದೆ ಮತ್ತು ಸಂಬಂಧಗಳಲ್ಲಿ ಸಾಮರಸ್ಯವನ್ನು ಮೂಡಲು ಸಹಾಯ ಮಾಡುತ್ತದೆ ಹಾಗೂ ದಂಪತಿಗಳಿಬ್ಬರ ನಡುವೆ ಉತ್ತಮ ಒಡನಾಟ ವೃದ್ಧಿಸುತ್ತದೆ.
ಪ್ರತಿಯೊಂದು ದಂಪತಿಗಳು ಒಮ್ಮೆ ಮಾನವ ಗುರುವಿನಿಂದ ವೈಯಕ್ತಿಕರಿಸಿದ ಮಾರ್ಗದರ್ಶನದ ಸಹಾಯದಿಂದ ಕೇವಲ 9 ರಿಂದ 180 ದಿನಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಅನುಭವಿಸಲು ಏಕೆ ಪ್ರಯತ್ನಿಸಬಾರದು.

ತಮ್ಮ ದಿವ್ಯ ಜ್ಞಾನದ ಮೂಲಕ ಲಕ್ಷಾಂತರ ಕುಟುಂಬಗಳ ಜೀವನವನ್ನು ಕೇವಲ 9 ರಿಂದ 180 ದಿನಗಳಲ್ಲಿ ಬದಲಾಯಿಸಿದ್ದಾರೆ.