ಇಂತಹ ಮಹತ್ತರ ಕಾರ್ಯಗಳಿಗಾಗಿ ಮಾನವ ಗುರು ಅವರು ಶ್ರಮಿಸುತ್ತಿದ್ದಾರೆ

ನಮ್ಮ ಸಂತೃಪ್ತ ಗ್ರಾಹಕರು

ಮಂಜುಳಾ

ಶಿಕ್ಷಕಿ, ಕರ್ನಾಟಕ

ವೃತ್ತಿಯಿಂದ ನಾನೊಬ್ಬ ಶಿಕ್ಷಕಿ. ನಾನು, ನನ್ನ ಪತಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದೇನೆ. ನಮ್ಮದು ಚಿಕ್ಕ ಕುಟುಂಬವಾದರೂ ಸಂತಸ ಮತ್ತು ಸಂತೃಪ್ತಿಯಿಂದ ಜೀವನ ಸಾಗಿಸುತ್ತಿದ್ದೆವು. ಆದರೆ ದಿನಕಳೆದಂತೆ ನಮ್ಮ ಕುಟುಂಬದಲ್ಲಿನ ಸಂತಸ ನಿಧಾನವಾಗಿ ಮಾಯವಾಗತೊಡಗಿತು. ನನ್ನ ಮತ್ತು ನನ್ನ ಪತಿಯ ಮಧ್ಯೆ ಚಿಕ್ಕ ಪುಟ್ಟ ವಾದ-ವಿವಾದಗಳು ನಡೆಯಲು ಶುರುವಾಯಿತು, ಇತ್ತ ನಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿಯತೊಡಗಿದರು, ಮತ್ತು ನಮ್ಮ ಆರ್ಥಿಕ ಪರಿಸ್ಥಿತಿಯಂತು ಹೇಳಿಕೊಳ್ಳಲಾರದಂತಹ ಸ್ಥಿತಿಯನ್ನು ತಲುಪಿತ್ತು. ಇದ್ದಕ್ಕಿದ್ದಂತೆ ನಮ್ಮ ಕುಟುಂಬದಲ್ಲಿ ಇಷ್ಟೆಲ್ಲ ಸಮಸ್ಯೆಗಳು ಏಕೆ ಆರಂಭವಾದವು? ಎಂದು ನಾನು ಆಶ್ಚರ್ಯಕ್ಕೆ ಒಳಗಾಗಿದ್ದೆ.

ಹೀಗೆ ಜೀವನ ಸಾಗುತ್ತಿರುವಾಗ 2009 ನೇಯ ಇಸವಿಯಲ್ಲಿ ಒಂದು ದಿನ ನಾನು ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದೇನೆ ಎಂಬ ಕೆಟ್ಟ ಸುದ್ದಿ ಬರಸಿಡಿಲಿನಂತೆ ನಮ್ಮ ಕುಟುಂಬಕ್ಕೆ ಅಪ್ಪಳಿಸಿತು. ಅಂದಿನಿಂದ ನಮ್ಮ ಮನೆಯ ವಾತಾವರಣವೇ ಬದಲಾಗಿ ಹೋಯಿತು. ನನ್ನ ಪತಿ ಮತ್ತು ಮಕ್ಕಳ ಬಗ್ಗೆ ನನಗೆ ಚಿಂತೆ ಕಾಡಲು ಶುರುವಾಯಿತು. ನಾನಿಲ್ಲದೆ ಇವರು ಹೇಗೆ ಜೀವನ ಸಾಗಿಸುತ್ತಾರೆ ಎಂಬುದೇ ನನ್ನ ಚಿಂತೆಗೆ ಕಾರಣವಾಗಿತ್ತು. ಇಂತಹ ಸಂದರ್ಭದಲ್ಲಿ ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ನನ್ನ ಮಕ್ಕಳು, ನನ್ನ ಪತಿ ದುಃಖಿತರಾಗಿದ್ದರು. ಇದಷ್ಟೇ ಅಲ್ಲದೆ ನಮ್ಮ ಮನೆಯಲ್ಲಿ ಈ ಹಿಂದೆ ಇದ್ದ ಸಮಸ್ಯೆಗಳೆಲ್ಲ ಮತ್ತಷ್ಟು ಉಲ್ಬಣಿಸತೊಡಗಿದವು.

ನಾನು ಆ ಸಂದರ್ಭದಲ್ಲಿ ತುಂಬಾ ನೋವಿನಲ್ಲಿದ್ದೆ. ಒಂದು ವೇಳೆ ನಾನೇನಾದರು ತೀರಿಕೊಂಡರೆ ನನ್ನ ಕುಟುಂಬ ಸದಸ್ಯರ ಜೀವನದ ಬಗ್ಗೆ ತುಂಬಾ ಯೋಚನೆ ಮಾಡುತ್ತಿದ್ದೆ. ನನ್ನ ಕುಟುಂಬವು ನನಗೆ ಸಮಾಧಾನ ಹೇಳಿ, ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿತ್ತು, ಆದರೆ ಅದು ಸುಲಭದ ಕೆಲಸವಾಗಿರಲಿಲ್ಲ. ನಾನು ಬೆಂಗಳೂರಿನಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ನಾನು ಕೀಮೋಥೆರಪಿ ಮತ್ತು ರೇಡಿಯೊಥೆರಪಿ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ, ಮತ್ತು ಈ ಚಿಕಿತ್ಸೆಯನ್ನು 2-3 ವರ್ಷಗಳ ಕಾಲ ಮುಂದುವರೆಸಿದೆ. ಆದರೆ ಎಲ್ಲವೂ ವ್ಯರ್ಥವಾಯಿತು. ನನ್ನ ದೇಹ ಯಾವ ಚಿಕಿತ್ಸೆಗಳಿಗೂ ಸ್ಪಂದಿಸಲಿಲ್ಲ. ನನ್ನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಹೋಯಿತು. ನಾನು ಎಲ್ಲ ಭರವಸೆಗಳನ್ನು ಕಳೆದುಕೊಂಡಿದ್ದೆ. ಮುಂದೆ ಎದುರಾಗುವ ಅಂತಿಮ ಅದೃಷ್ಟದ ಆಟಕ್ಕೆ ನಾನು ನನ್ನ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲು ಪ್ರಾರಂಭಿಸಿದೆ.

ನಮ್ಮ ಕುಟುಂಬ ಮೊದಲೇ ಹಣಕಾಸಿನ ಸಮಸ್ಯೆಗಳಿಂದ ಬಳಲುತ್ತಿತ್ತು, ಇದರ ಜೊತೆಗೆ ನನ್ನ ಅನಾರೋಗ್ಯದ ಚಿಕಿತ್ಸೆಗಾಗಿ 10 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರಿಂದ ನಾವು ಸಾಲದ ಸುಳಿಗೆ ಸಿಲುಕಿ ಬಿಟ್ಟೆವು. ಈ ಸಮಸ್ಯೆ ನನ್ನ ಕುಟುಂಬವನ್ನು ದೊಡ್ಡ ಸಂಕಷ್ಟಕ್ಕೆ ನೂಕಿತು. ನಾನು ಬದುಕುಳಿಯುವ ಅವಕಾಶವೇ ಇಲ್ಲವಾದ್ದರಿಂದ ನಾವೇಕೆ ಇಷ್ಟೊಂದು ಹಣವನ್ನು ಖರ್ಚು ಮಾಡಬೇಕು ಎಂದು ನಾನು ಯೋಚಿಸುತ್ತಿದ್ದೆ. ಕೊನೆ ಪಕ್ಷ ನಾವು ಇಷ್ಟೊಂದು ಹಣವನ್ನು ನನ್ನ ಅನಾರೋಗ್ಯಕ್ಕೆ ಬದಲಾಗಿ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಬಳಸಬಹು ಎಂದು ಯೋಚಿಸುತ್ತಿದ್ದೆ.

ಹೀಗಿರುವಾಗ ನಾವು ಒಂದು ದಿನ ಟಿ,ವ್ಹೀ ನೋಡುತ್ತಾ ಕುಳಿತಾಗ ಮಾನವ ಗುರುವಿನ ದಿವ್ಯ ಜ್ಞಾನದ ಮಾರ್ಗದರ್ಶನ ಬಗ್ಗೆ ತಿಳಿದುಕೊಂಡೆವು. ನನ್ನ ಪತಿ ಮಾನವ ಗುರು ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಅವರ ಕಾರ್ಯಕ್ರಮಗಳನ್ನು ನಿರಂತರವಾಗಿ ನೋಡಲು ಶುರು ಮಾಡಿದರು. ನಮ್ಮಂತೆ ಇದ್ದ ಅನೇಕ ಕುಟುಂಬಗಳು ಮಾನವ ಗುರುವಿನ ದಿವ್ಯ ಜ್ಞಾನದ ಮಾರ್ಗದರ್ಶನ ಮೂಲಕ ಮಾರಕ ಖಾಯಿಲೆಗಳಿಂದ ಮುಕ್ತಿ ಹೊಂದಿದ ಸಾಕಷ್ಟು ಉದಾಹರಣೆಗಳನ್ನು ನನ್ನ ಪತಿ ನೋಡಿದರು. ಕೊನೆಗೆ ನನ್ನ ಪತಿ ಇದುವೇ ನಮಗೆ ಸರಿಯಾದ ಮತ್ತು ಕೊನೆಯ ಆಯ್ಕೆ ಎಂದು ದೃಢವಾಗಿ ನಂಬಿದರು, ಮತ್ತು ಇದು ಖಂಡಿತವಾಗಿಯೂ ನಮಗೆ ಸಹಾಯ ಮಾಡುತ್ತದೆ ಎಂಬ ಬಲವಾದ ವಿಶ್ವಾಸ ಅವರಲ್ಲಿ ಮೂಡಿತ್ತು. ಆದ್ದರಿಂದ ಅವರು ಮಾನವ ಗುರು ಅವರಿಂದ ಮಾರ್ಗದರ್ಶನ ಪಡೆದುಕೊಳ್ಳಲು ಪ್ರಾರಂಭಿಸಿದರು ಮತ್ತು  ನಮ್ಮ ಮನೆಯಲ್ಲಿ ಅಳವಡಿಸಿಕೊಂಡರು. ನಮ್ಮ ಕುಟುಂಬದ ಪ್ರತಿಯೊಬ್ಬರು ಮಾನವ ಗುರುವಿನ ದಿವ್ಯ ಜ್ಞಾನದ ಮಾರ್ಗದರ್ಶನವನ್ನು ಅನುಸರಿಸಲು ಪ್ರಾರಂಭಿಸಿದೆವು.

ಕೇವಲ 2 ತಿಂಗಳುಗಳೊಳಗೆ ನನ್ನ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಲು ಶುರುವಾದವು. ಸಕಾರಾತ್ಮಕತೆ, ಆತ್ಮವಿಶ್ವಾಸ, ಸಂತಸ ಮತ್ತು ಆರೋಗ್ಯಕರ ಜೀವನ ನನ್ನ ಜೀವನದಲ್ಲಿ ಮತ್ತೆ ಮರುಕಳಿಸಲು ಪ್ರಾರಂಭವಾದವು. ನನ್ನ ಕುಟುಂಬ ಸದಸ್ಯರು ಸಹ ನನ್ನ ಆರೋಗ್ಯದಲ್ಲಾದ ತೀವ್ರವಾದ ಬದಲಾವಣೆಗಳನ್ನು ಗಮನಿಸಿದರು. ಆ ಸಮಯದಲ್ಲಿ ವೈದ್ಯರು ಹೇಳಿದ ಔಷದಿಗಳನ್ನು ಮತ್ತು ಚಿಕಿತ್ಸೆಯನ್ನು ನಾನು ಮುಂದುವರೆಸಿದ್ದೆ. ಆದರೆ ಮಾನವ ಗುರೂಜಿಯವರು ಚಿಕಿತ್ಸೆ ಪಡೆದುಕೊಳ್ಳುವುದನ್ನು ನಿಲ್ಲಿಸಿ ಎಂದು ಯಾವತ್ತೂ ಹೇಳಲಿಲ್ಲ. ಆದರೆ ಚಿಕಿತ್ಸೆಯ ಜೊತೆ ಜೊತೆಗೆ  ದಿವ್ಯ ಜ್ಞಾನದ ಮಾರ್ಗದರ್ಶನವನ್ನು ಅನುಸರಿಸಿ ಎಂದು ಮಾರ್ಗದರ್ಶನ ನೀಡುತ್ತಿದ್ದರು. ನಂತರ ನಾನು ನಿಯಮಿತವಾಗಿ ಮಾಡಿಸುತ್ತಿದ್ದ ಚೆಕ್‌ಅಪ್‌ಗಳಲ್ಲಿ ನನ್ನ ಆರೋಗ್ಯದ ಎಲ್ಲಾ ವರದಿಗಳಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ, ಅಚ್ಚರಿಯ ರೀತಿಯಲ್ಲಿ ಪ್ರಗತಿಯಾಗಿರುವುದು ಕಂಡುಬಂತು. 6 ತಿಂಗಳುಗಳ ಒಳಗೆ, ನನ್ನ ಆರೋಗ್ಯದ ತಪಾಸಣೆಯ ಎಲ್ಲಾ ವರದಿಗಳು ಸಕಾರಾತ್ಮಕವಾಗಿ(ನಾರ್ಮಲ್‌) ಬಂದವು. “ನೀವು ಸಂಪೂರ್ಣವಾಗಿ ಆರೋಗ್ಯದಿಂದಿದ್ದೀರಿ, ನಿಮ್ಮ ದೇಹದಲ್ಲಿ ಕ್ಯಾನ್ಸರ್‌ನ ಯಾವುದೇ ಅಂಶಗಳು ಕಾಣಿಸುತ್ತಿಲ್ಲ” ಎಂದು ನನ್ನನ್ನು ತಪಾಸಣೆ ಮಾಡುತ್ತಿದ್ದ ವೈದ್ಯರು ಹೇಳಿದರು. ಅದರ ಜೊತೆಗೆ ಇನ್ನು ಮುಂದೆ ಯಾವುದೇ ರೀತಿಯ ಔಷಧಿ, ಚಿಕಿತ್ಸೆ, ಥೆರೆಪಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ, ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ ಎಂದು ವೈದ್ಯರು ಹೇಳಿದರು. ಆ ಕ್ಷಣದಲ್ಲಿ ವೈದ್ಯರು ಹೇಳುತ್ತಿದ್ದ ಮಾತುಗಳನ್ನು ನಮ್ಮ ಕಿವಿಗಳಿಂದ ನಂಬಲು ಸಾಧ್ಯವಾಗಲಿಲ್ಲ. ನಾನು ಮತ್ತು ನನ್ನ ಪತಿ ಅಚ್ಚರಿಗೆ ಒಳಗಾಗಿದ್ದೆವು.

ಅದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣ. ನನ್ನ ಕುಟುಂಬ, ನನ್ನ ಸ್ನೇಹಿತರು ಮತ್ತು ಸಂಬಂಧಿಕರು ನನ್ನ ಜೀವನದಲ್ಲಾದ ಬದಲಾವಣೆಗಳಿಂದ ತುಂಬಾ ಸಂತಸ ಪಟ್ಟರು. ಆರೋಗ್ಯದ ಹೊರತಾಗಿಯೂ ನಮ್ಮ ಹಣಕಾಸು, ಸಂಬಂಧ ಮತ್ತು ನಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಕೂಡ ನಾವು ಸಕಾರಾತ್ಮಕ ಬದಲಾವಣೆಗಳನ್ನು ಕಂಡುಕೊಂಡಿದ್ದೇವೆ. ಮೊದಮೊದಲು ನಾವು ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಯನ್ನು ಮಾನವ ಗುರುವಿನ ದಿವ್ಯ ಜ್ಞಾನದ ಮಾರ್ಗದರ್ಶನದ ಮೂಲಕ ಹೇಗೆ ಗುಣಪಡಿಸಬಹುದು ಎಂದು ನಾವು ಆಶ್ಚರ್ಯ ಪಡುತ್ತಿದ್ದೆವು. ಪ್ರತಿಯೊಬ್ಬರ ಜೀವನದಲ್ಲಿ ವಿಶ್ವ ಶಕ್ತಿಯ ಮಹತ್ವದ ಬಗ್ಗೆ ಮಾನವ ಗುರು ಅವರು ನಮಗೆ ವಿವರಿಸಿ ಹೇಳಿದರು.
ನಮ್ಮ ಸುತ್ತಮುತ್ತಲಿನ ಪ್ರದೇಶಗಳು ನಾವು ನಮ್ಮ ಹೆಚ್ಚಿನ ಸಮಯವನ್ನು ಕಳೆಯುವ ಸ್ಥಳಗಳಾಗಿವೆ. ನಾವು ಸಾಮಾನ್ಯವಾಗಿ ನಮ್ಮ ಮನೆ / ಕೆಲಸದ ಸ್ಥಳದಲ್ಲಿ ಗರಿಷ್ಟ ಸಮಯವನ್ನು ಕಳೆಯುತ್ತೇವೆ. ದಿನದ 24 ಘಂಟೆಗಳಲ್ಲಿ ಸುಮಾರು 20 ಘಂಟೆಗಳನ್ನು ನಾವು ಈ ಎರೆಡು ಸ್ಥಳಗಳಲ್ಲಿ ಕಳೆಯುತ್ತೇವೆ.

2000ನೇ ಇಸವಿಯಲ್ಲಿ ಮಾನವ ಗುರು ಜಗತ್ತಿನಲ್ಲಿರುವಂತಹ ಪ್ರತಿಯೊಂದು ಕುಟುಂಬಕ್ಕೆ ದಿವ್ಯ ಜ್ಞಾನದ ಮಾರ್ಗದರ್ಶನವನ್ನು ರಚಿಸಿದ್ದಾರೆ, ಇದು ಪ್ರಾಚೀನ ಭಾರತೀಯ ಮೌಲ್ಯ ಹಾಗು ಸಂಸ್ಕೃತಿಯನ್ನು ಆಧಾರಿಸಿದ್ದು ವೈಜ್ಞಾನಿಕ ತಳಹದಿಯನ್ನು ಹೊಂದಿದೆ, ಇದು ಯಾವುದೇ ಜಾತಿ- ಧರ್ಮಕ್ಕೆ ಸೀಮೀತವಾಗಿರದೇ ಕೇವಲ 9 ರಿಂದ 180 ದಿನಗಳಲ್ಲಿ ಇಡೀ ಕುಟುಂಬದ ಆನಂದಮಯ ಜೀವನದ ಮಾರ್ಗವನ್ನು ಬಹಿರಂಗಪಡಿಸುತ್ತದೆ.

ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಶಕ್ತಿ ಹೊಂದಿರುತ್ತಾನೆ, ಆ ಶಕ್ತಿಯೂ ಕೂಡ ಅದರದೇ ಆದ ಕಂಪನದ ತರಂಗವನ್ನು ಹೊಂದಿರುತ್ತೆ, ಅದೇ ರೀತಿಯಲ್ಲಿ ಅ ವ್ಯಕ್ತಿ ವಾಸಿಸುವಂತಹ ಸ್ಥಳ ಅಥವಾ ಉದ್ಯೋಗ ಸ್ಥಳವೂ ಕೂಡ ತನ್ನದೇ ಆದ ಶಕ್ತಿ ಹೊಂದಿರುತ್ತೆ, ಅದು ಸಹಿತ ಅದರದೇ ಆದ ಕಂಪನ ತರಂಗವನ್ನು ಹೊಂದಿರುತ್ತೆ, ಇದೇ ರೀತಿಯಲ್ಲಿ ವಿಶ್ವ ಶಕ್ತಿಯೂ ಕೂಡ ತನ್ನದೇ ಆದ ಕಂಪನ ತರಂಗವನ್ನು ಹೊಂದಿರುತ್ತೆ, ಯಾವಾಗ ವ್ಯಕ್ತಿಯ ಶಕ್ತಿ ಹಾಗೂ ಅವರು ವಾಸಿಸುವಂತಹ ಸ್ಥಳ ಅವುಗಳ ಕಂಪನ ತರಂಗದ ಮೂಲಕ ವಿಶ್ವ ಶಕ್ತಿಯೊಂದಿಗೆ ಸಂಪರ್ಕಿಸಿದಾಗ ವಿಶ್ವಶಕ್ತಿಯು ವ್ಯಕ್ತಿಯ ದೇಹ ಮತ್ತು ಸ್ಥಳದಲ್ಲಿ ಸಂವಹನ ಮಾಡುವುದಕ್ಕೆ ಆರಂಭಿಸುತ್ತೆ, ಅಗ ದೇಹದಲ್ಲಿ ಟ್ರೀಲಿಯನ್‌ಗಟ್ಟಲೇ ಇರುವಂತಹ ಜೀವಕೋಶಗಳಿಗೆ ವಿಶ್ವಶಕ್ತಿ ಅಗತ್ಯ ಇರುವಂತಹ ಶಕ್ತಿಯನ್ನು ಪೂರೈಸುತ್ತೆ.

ದೇಹದಲ್ಲಿ ಟ್ರೀಲಿಯನ್‌ಗಟ್ಟಲೇ ಇರುವಂತಹ ಜೀವಕೋಶಗಳು ಮತ್ತು ದೇಹದಲ್ಲಿನ ಅಂಗಗಳು ತಮಗೆ ಸಾಕಾಗುವಷ್ಟು ಶಕ್ತಿಯನ್ನು ಪಡೆದಾಗ ಅವು ಹೆಚ್ಚಿನ ಶಕ್ತಿಯುತ ಮತ್ತು ಸಕ್ರೀಯವಾಗುತ್ತವೆ, ಇದರಿಂದ ಕುಟುಂಬದ ಪ್ರತಿಯೊಬ್ಬ ಸದಸ್ಯರು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ಸಧೃಢರಾಗುತ್ತಾರೆ. ಯಾವಾಗ ನೀವು ಮಾನವ ಗುರುವಿನ ವೈಯಕ್ತಿಕರಿಸಿದ ಮಾರ್ಗದರ್ಶನವನ್ನು ಅನುಸರಿಸುತ್ತಿರೋ, ಮುಂದಿನ 9 ರಿಂದ 180 ದಿನಗಳಲ್ಲಿ ನೀವು ಆನಂದಮಯ ಜೀವನವನ್ನು ಅನುಭವಿಸಲು ಪ್ರಾರಂಭಿಸುತ್ತೀರಿ.

ಈ ಬೆಂಬಲವು ದೇಹದ ಜೀವಕೋಶಗಳು ಮತ್ತು ಅಂಗಗಳಿಗೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ ಎಂಬುದು ಖಚಿತವಾಗುತ್ತದೆ. ಈ ಸಂದರ್ಭವು ಘಟಿಸಿದ ನಂತರ, ನಿಮ್ಮ ಚಿಕಿತ್ಸೆಯಲ್ಲಿ ನೀವು ಸಕಾರಾತ್ಮಕ ಬದಲಾವಣೆಗಳನ್ನು ನೀವು ಅನುಭವಿಸುತ್ತೀರಿ ಮತ್ತು ಕ್ಯಾನ್ಸರ್‌ ವರದಿಗಳು 9 ರಿಂದ 180 ದಿನಗಳಲ್ಲಿ ಖುಣಾತ್ಮಕತೆಯಿಂದ ಧನಾತ್ಮಕವಾಗಿ ಬದಲಾಗುತ್ತವೆ.
ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಕ್ಯಾನ್ಸರ್‌ನಂತಹ ಗಂಭೀರವಾದ ಕಾಯಿಲೆಗಳ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ.

ನಮ್ಮ ಕುಟುಂಬದಲ್ಲಾದ ಇಷ್ಟೆಲ್ಲ ಬದಲಾವಣೆಗಳಿಂದ ನಾವು ನಿಜಕ್ಕೂ ಸಂತಸಗೊಂಡಿದ್ದೇವೆ, ಇದಕ್ಕೆಲ್ಲಾ ಕಾರಣೀಭೂತರಾದ ಮಾನವ ಗುರು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆಯಬೇಕೆಂಬುದು ನಮ್ಮ ಮಹದಾಸೆಯಾಗಿತ್ತು. ಗುರೂಜಿಯವರು ತುಮಕೂರಿಗೆ ಬಂದಾಗ ಅಂತಿಮವಾಗಿ ನಾವು ಅವರನ್ನು ಭೇಟಿಯಾಗುವ ಅವಕಾಶ ಒದಗಿ ಬಂತು. ನಾವು ಗುರೂಜಿಯವರನ್ನು ಭೇಟಿಯಾದೆವು, ಆ ಘಳಿಗೆಯಲ್ಲಿ ನನಗೆ ಮತ್ತು ನನ್ನ ಪತಿಗೆ ಒಂದು ದೈವಿಕ ಅನುಭವವಾಯಿತು. ನಾನು ಮಾನವ ಗುರು ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಗುರೂಜಿಯವರು ನನಗೆ ಹೊಸ ಜೀವನವನ್ನು ನೀಡಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ.

ಮಾನವಗುರು

ಶ್ರೀಮತಿ. ಮಂಜುಳಾ ಮತ್ತು ಅವರ ಪತಿ ಕರ್ನಾಟಕದ ತುಮಕೂರಿನಲ್ಲಿ ನಡೆದ ಸರಳ ಪರಿವಾರ ಕಾರ್ಯಕ್ರಮದಲ್ಲಿ ಮಾನವ ಗುರು ಶ್ರೀ,ಚಂದ್ರಶೇಖರ ಗುರೂಜಿಯವರನ್ನು ಭೇಟಿಯಾದ ಸಂದರ್ಭ.

18 ಫೆಬ್ರವರಿ 2018

Facebook Twitter Instagram Linkedin Youtube