ಅವರು ಮಾನವೀಯ ಸೇವೆಗಾಗಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದಾರೆ.
- ಜೀವನ ಸಮಸ್ಯೆ ಮುಕ್ತ ಗ್ರಾಮ
- ಶಿಕ್ಷಣ ಸಮಸ್ಯೆ ಮುಕ್ತ ಗ್ರಾಮ
- ಸಾಮೂಹಿಕ ವಿವಾಹ
- ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವುದು
ಮಾನವ ಗುರು ಶ್ರೀ ಚಂದ್ರಶೇಖರ ಗುರೂಜಿಯವರು ವೃತ್ತಿಯಿಂದ ಒಬ್ಬ ಸಿವಿಲ್ ಎಂಜಿನಿಯರ್ ಆಗಿದ್ದು, ಈ ಜಗತ್ತಿನಲ್ಲಿರುವ ಪ್ರತಿಯೊಂದು ಕುಟುಂಬಕ್ಕೂ ಉದಾತ್ತವಾದ ಸೇವೆಯನ್ನು ನೀಡುತ್ತಿದ್ದಾರೆ.
ಅವರು ಮಾನವೀಯ ಸೇವೆಗಾಗಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದಾರೆ.
ಮಾನವ ಅಭಿವೃದ್ಧಿಯನ್ನು ಮಾಡದ ಹೊರತು, ಗ್ರಾಮೀಣಾಭಿವೃದ್ಧಿಯನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮಾನವ ಗುರು ಅವರು ಅರ್ಥ ಮಾಡಿಕೊಂಡಿದ್ದರು. ಯಾವಾಗ ಪ್ರತಿಯೊಂದು ಕುಟುಂಬವು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲು ಸಾಧ್ಯವಾಗುತ್ತದೆಯೋ.. ಅಥವಾ ಯಾವಾಗ ಪ್ರತಿಯೊಂದು ಕುಟುಂಬವು ಆತ್ಮನಿರ್ಭರ ಕುಟುಂಬವಾಗುತ್ತದೆಯೋ ಆಗ ಮಾತ್ರ ನಾವು ಗ್ರಾಮೀಣಾಭಿವೃದ್ಧಿಯನ್ನು ಪರಿಣಾಮಕಾರಿಯಾಗಿ ಮಾಡಬಹುದು.
ಮಾನವ ಗುರು ಅವರು 2015 ರಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಗೊಡಚಿ ಗ್ರಾಮವನ್ನು ದತ್ತು ಪಡೆದುಕೊಳ್ಳುತ್ತಾರೆ. ಈ ಮಾದರಿಯ ದತ್ತು ಪಡೆಯುವ ಕಾರ್ಯದಲ್ಲಿ ಈ ಗ್ರಾಮವು ಭಾರತದ ಮೊದಲ ಮಾದರಿ ಗ್ರಾಮವಾಗಿದೆ. ಈ ಗ್ರಾಮವನ್ನು ದತ್ತು ಪಡೆದ 8 ತಿಂಗಳೊಳಗೆ ಈ ಗ್ರಾಮವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪರಿವರ್ತನೆಗೊಳ್ಳುತ್ತದೆ.
ಮಾನವ ಗುರು ಅವರು 640 ಕುಟುಂಬಗಳಿಗೆ ಅನನ್ಯ ಜ್ಞಾನದ ಮಾರ್ಗದರ್ಶನವನ್ನು ನೀಡಿದ್ದರು. ಅವರ ಮಾರ್ಗದರ್ಶನವನ್ನು ಸರಿಯಾಗಿ ಅನುಸರಿಸಿದವರು, ಕೇವಲ 9 ರಿಂದ 180 ದಿನಗಳಲ್ಲಿ ತಮ್ಮ ಜೀವನದ ಎಲ್ಲಾ ಸಮಸ್ಯೆಗಳಲ್ಲಿ ಹೊರ ಬಂದು ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸಿದ್ದಾರೆ. ಗೊಡಚಿ ಗ್ರಾಮದ ಎಲ್ಲ ಮಕ್ಕಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಾರೆ, ಯುವಕರು ತಮ್ಮ ಉದ್ಯೋಗ ಮತ್ತು ವೃತ್ತಿ ಜೀವನದಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ಕಂಡುಕೊಳ್ಳುತ್ತಾರೆ, ವ್ಯಾಪಾರಸ್ಥರು ತಮ್ಮ ವ್ಯವಹಾರಗಳಲ್ಲಿ ಯಶಸ್ಸು ಕಂಡರೆ, ರೈತರು ತಮ್ಮ ಕೃಷಿಯಲ್ಲಿ ಅಚ್ಚರಿಯ ಅಭಿವೃದ್ಧಿಯನ್ನು ಕಾಣುತ್ತಾರೆ, ಸಂಬಂಧಿಕರ ಮದ್ಯೆ ಅನ್ಯೋನ್ಯತೆ ಮೂಡುತ್ತದೆ, ಗ್ರಾಮಸ್ಥರು ಆರ್ಥಿಕವಾಗಿ ಸದೃಢರಾಗುತ್ತಾರೆ, ವಿವಾಹದಲ್ಲಿ ವಿಳಂಬತೆ ಮತ್ತು ಹಲವಾರು ಅನಾರೋಗ್ಯದಿಂದ ಬಳಲುತ್ತಿದ್ದವರ ಎಲ್ಲ ಸಮಸ್ಯೆಗಳು ಅಚ್ಚರಿಯ ರೀತಿಯಲ್ಲಿ ನಿವಾರಣೆಯಾಗುತ್ತವೆ.
ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಎಂಬ ಮಹತ್ತರ ಉದ್ದೇಶದಿಂದ ಮಾನವ ಗುರು ಅವರು 2018 ರಲ್ಲಿ, ಮೂಲ ಸೌಕರ್ಯಗಳಿಂದ ಹಿಂದುಳಿದ ಮಕ್ಕಳಿಗೆ 10 ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡುವುದಕ್ಕಾಗಿ ಕರ್ನಾಟಕದ ಧಾರವಾಡ ಜಿಲ್ಲೆಯ, ಕಲಘಟಗಿ ತಾಲ್ಲೂಕಿನ ಬಿ ಶಿಗಿಗಟ್ಟಿ ಎಂಬ ಗ್ರಾಮದಲ್ಲಿ ಶಾಲೆಯೊಂದನ್ನು ಆರಂಭಿಸಿದ್ದಾರೆ. ವಿಶಿಷ್ಟ ವಾತಾವರಣದಲ್ಲಿ, ಮಾನವ ಗುರುವಿನ ಅನನ್ಯ ಜ್ಞಾನದ ಮಾರ್ಗದರ್ಶನದ ಸಹಾಯದಿಂದ ಅಪಾರವಾದ ವಿಶ್ವ ಶಕ್ತಿಯನ್ನು ಮನೆ ಹಾಗು ಕಾರ್ಯಸ್ಥಳದಲ್ಲಿ ಬಳಸಿಕೊಂಡು ಬರೇ ಶೈಕ್ಷಣಿಕವಾಗಿ ಅಲ್ಲದೆ ದೈಹಿಕವಾಗಿ, ಮಾನಸಿಕವಾಗಿ ಹಾಗು ಸಾಮಾಜಿಕವಾಗಿ ಮಕ್ಕಳು ಸಂಪೂರ್ಣ ಅಭಿವೃದ್ಧಿ ಪಡೆಯಬಹುದು
ಈ ಸಾಮಾಜಿಕ ಸೇವೆಗಳ ಭಾಗವಾಗಿ, ಮಾನವ ಗುರು ಅವರು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಜನರು ಗೌರವದಿಂದ ಮದುವೆಯಾಗಲು ಕಾರಣೀಕರ್ತರಾಗಿದ್ದಾರೆ ಮತ್ತು ಅನ್ಯೋನ್ಯವಾಗಿ ವೈವಾಹಿಕ ಜೀವನ ನಡೆಸಲು ಆಶೀರ್ವಾದ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ.
ಕೃಷಿಯು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದ್ದರೂ ಕೂಡ ರೈತರು ಮತ್ತು ಅವರ ಕುಟುಂಬಗಳು ಅನುಭವಿಸುತ್ತಿರುವ ಸಮಸ್ಯೆಗಳ ಮಟ್ಟವು ಹೆಚ್ಚುತ್ತಲೇ ಇರುವ ಪರಿಸ್ಥಿತಿ ಇಂದಿಗೂ ಮುಂದುವರೆದಿದೆ. ಕೃಷಿ ಸೇರಿದಂತೆ, ರೈತರನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳ ಒತ್ತಡಕ್ಕೆ ಮಣಿದು ರೈತರು ಇಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಪರಿಸ್ಥಿತಿಯ ತೀವ್ರತೆಯನ್ನು ಅರಿತುಕೊಂಡ ಮಾನವ ಗುರು ಅವರು ರೈತರ ಸಮಸ್ಯೆಗಳನ್ನು ನಿವಾರಿಸಲು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ ಮತ್ತು ತಮ್ಮ ಅನನ್ಯ ಜ್ಞಾನದ ಮಾರ್ಗದರ್ಶನವನ್ನು ರೈತರು ಅಳವಡಿಸಿಕೊಂಡು ಅದರ ಲಾಭವನ್ನು ರೈತರಿಗೆ ನೀಡಲು ಮುಂದಾಗಿದ್ದಾರೆ. ಮಾನವ ಗುರು ಅವರ ಮಾರ್ಗದರ್ಶನವನ್ನು ಪಾಲಿಸುತ್ತಾ, ವಿಶ್ವ ಶಕ್ತಿಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ರೈತರು ಕೇವಲ 9 ರಿಂದ 180 ದಿನಗಳಲ್ಲಿ ಆನಂದಮಯ ಜೀವನವನ್ನು ಅನುಭವಿಸುತ್ತಿದ್ದಾರೆ. ರೈತರು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಇದು ಸಹಾಯ ಮಾಡುತ್ತದೆ. ಇದರಿಂದಾಗಿ ರೈತರಲ್ಲಿ ಬರುವ ಆತ್ಮಹತ್ಯೆಯಂತಹ ಆಲೋಚನೆಗಳನ್ನು ತಡೆಗಟ್ಟುತ್ತದೆ.