ಇಂತಹ ಮಹತ್ತರ ಕಾರ್ಯಗಳಿಗಾಗಿ ಮಾನವ ಗುರು ಅವರು ಶ್ರಮಿಸುತ್ತಿದ್ದಾರೆ

ನಮ್ಮ ಸಂತೃಪ್ತ ಗ್ರಾಹಕರು

ಅಖಿಲಾ ಆಯುಬ್‌ ಖಾನ್

ಸಾಮಾಜಿಕ ಕಾರ್ಯಕರ್ತೆ, ಕರ್ನಾಟಕ

ನಾವು ಹಲವಾರು ಅಡೆತಡೆಗಳನ್ನು ದಾಟಿಕೊಂಡು ನಮ್ಮ ಕನಸಿನ ಮನೆಯನ್ನು ನಿರ್ಮಿಸಿಕೊಂಡೆವು, ಆದರೆ ಆ ಹೊಸ ಮನೆಗೆ ಕಾಲಿಟ್ಟ ಬಳಿಕ ನಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಯಿತು. ನಮ್ಮ ಆರ್ಥಿಕ ಪರಿಸ್ಥಿತಿಯಂತು ಹದಗೆಟ್ಟು ಹೋಯಿತು. ನಮಗೆ ಬೇಕಾದವುಗಳನ್ನು ಅಥವಾ ಮನೆಯಲ್ಲಿ ಅವಶ್ಯಕವಾಗಿರುವ ಯಾವ ವಸ್ತುಗಳನ್ನು ಖರೀದಿಸಲು ನಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ನಮ್ಮ ದಿನನಿತ್ಯದ ಜೀವನ ನಿರ್ವಹಣೆಗೆ ಬೇಕಾದ ಅವಶ್ಯಕ ವಸ್ತುಗಳನ್ನು ಕೊಂಡುಕೊಳ್ಳಲು ಸಹ ನಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ನಾವು ಹೊಸ ಮನೆಯನ್ನು ನಿರ್ಮಿಸಿಕೊಂಡಿದ್ದರಿಂದ ಹಲವಾರು ಜನ ನಾವು ಆರ್ಥಿಕವಾಗಿ ಸದೃಢರಾಗಿದ್ದೇವೆ ಎಂದು ಭಾವಿಸಿ ನಮ್ಮ ಬಳಿ ಹಣದ ಸಹಾಯ ಕೇಳಲು ಬರುತ್ತಿದ್ದರು, ಆದರೆ ನಮ್ಮ ಪರಿಸ್ಥಿತಿಯ ಬಗ್ಗೆ ಅವರಿಗೆ ತಿಳಿ ಹೇಳಲು ತುಂಬಾ ಕಷ್ಟವಾಗುತ್ತಿತ್ತು.

ನಾನು ಸಾಲಮಾಡಿಕೊಂಡು ಹಣ ತಂದು ಒಂದು ಸಣ್ಣ ಪ್ರಮಾಣದ ವ್ಯವಹಾರದಲ್ಲಿ ಪಾಲುದಾರಳಾಗಿ ಹಣ ಹೂಡಿದ್ದೆ, ಆದರೆ ಬಿಸಿನೆಸ್‌ನಲ್ಲಿ ನಾನು ಯಾವುದೇ ರೀತಿಯ ಲಾಭಗಳಿಸಲು ಸಾಧ್ಯವಾಗಲಿಲ್ಲ. ದಿನಕಳೆದಂತೆ ನಮ್ಮ ವೈಯಕ್ತಿಕ ಜೀವನದಲ್ಲಿ ಒತ್ತಡ ಮತ್ತು ಉದ್ವೇಗಗಳು ಕಂಡುಬಂದವು, ನನ್ನ ಮತ್ತು ನನ್ನ ಪತಿಯ ಮಧ್ಯೆ ನಿರಂತರವಾಗಿ ಜಗಳಗಳು ಶುರುವಾದವು. ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು, ಒಂದು ಹೊತ್ತಿನ ಊಟಕ್ಕೂ ಯೋಚಿಸುವ ದಿನಗಳು ಬರಲಾರಂಭಿಸಿದವು. ಎಷ್ಟೋ ದಿನ ನಾವು ಕೇವಲ ಒಂದು ಲೋಟ ನೀರು ಕುಡಿದು ಖಾಲಿ ಹೊಟ್ಟೆಯಲ್ಲಿ ಮಲಗಿದ ದಿನಗಳಿದ್ದವು, ನಾನು ಪ್ರತಿದಿನ ರಾತ್ರಿ ಮಲಗಿದಾಗ ನಮ್ಮ ಪರಿಸ್ಥಿತಿಯನ್ನು ನೆನೆದುಕೊಂಡು ಕಣ್ಣೀರು ಹಾಕುತ್ತಾ ರಾತ್ರಿಗಳನ್ನು ಕಳೆಯುತ್ತಿದ್ದೆ.

ಈ ಪರಿಸ್ಥಿತಿಯನ್ನು ಹೇಗೆ ನಿವಾರಿಸುವುದು ಎಂಬುದು ನಮಗೆ ತಿಳಿದಿರಲಿಲ್ಲ. ನಾವು ಯಾವ ದಾರಿಯಲ್ಲಿ ಸಾಗಿದರು ಅಲ್ಲಿ ಸಮಸ್ಯೆಗಳು ನಮಗಾಗಿ ಕಾಯ್ದು ಕುಳಿತಿರುತ್ತಿದ್ದವು. ಆ ಸಮಯದಲ್ಲಿ ನಾವು ಸಾಕಷ್ಟು ಖಿನ್ನತೆಗೆ ಒಳಗಾಗಿದ್ದೆವು, ದೇವರು ಈ ಯಾತನಾಮಯ ಜೀವನವನ್ನು ನಮಗೇಕೆ ಕೊಟ್ಟನು? ಎಂದು ಯೋಚಿಸುತ್ತಿದ್ದೆವು. ನಾವು ನಮ್ಮ ಜೀವನವನ್ನು ಇಲ್ಲಿಗೆ ಮುಗಿಸಿ ಬಿಡಬೇಕು ಎಂಬ ಸಂದರ್ಭಗಳು ನಮ್ಮ ಜೀವನದಲ್ಲಿ ಎದುರಾಗಿದ್ದವು.

ಹೀಗೆ ದಿನಗಳು ಉರುಳುತ್ತಿರುವಾಗ ನಾವು ಒಂದು ದಿನ ಮಾನವ ಗುರುವಿನ ”ದಿವ್ಯ ಜ್ಞಾನದ” ಬಗ್ಗೆ ತಿಳಿದುಕೊಂಡೆವು. ಇದು ನಾವು ಸಮಸ್ಯೆಗಳಿಂದ ಹೊರಬರುವ ಏಕೈಕ ಮಾರ್ಗ ಎಂದೇ ನಾವು ಬಲವಾಗಿ ನಂಬಿದೆವು. ಆಗ ತಕ್ಷಣವೇ ನಾವು ಮಾನವ ಗುರು ಅವರಿಂದ ಮಾರ್ಗದರ್ಶನ ಪಡೆದುಕೊಳ್ಳಲು ನಿರ್ಧರಿಸಿದೆವು. ನಾವು ಮಾನವ ಗುರು ಅವರ ಕಾರ್ಯದಿಂದ ಪ್ರೇರಿತರಾಗಿದ್ದೆವು ಮತ್ತು ಗುರೂಜಿಯವರ ಕಾರ್ಯ ನಮಗೆ ನಮ್ಮ ಜೀವನದಲ್ಲಿ ಒಂದು ಬಗೆಯ ಭರವಸೆಯ ಭಾವವನ್ನು ನೀಡಿತ್ತು.

ನಾವು ಮಾನವ ಗುರುವಿನ ದಿವ್ಯ ಜ್ಞಾನದ ಮಾರ್ಗದರ್ಶನವನ್ನು ಅಳವಡಿಸಿಕೊಂಡು ಮಾನವ ಗುರುವಿನ ಮಾರ್ಗದರ್ಶನವನ್ನು ಪಾಲಿಸಲು ಶುರು ಮಾಡಿದೆವು. ಮಾರ್ಗದರ್ಶನವನ್ನು ಅನ್ನು ಅಳವಡಿಸಿಕೊಂಡ ನಂತರ ನಾವು ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವುದನ್ನು ಕಂಡುಕೊಂಡೆವು. ಮೊದಲನೆಯದಾಗಿ ನಮ್ಮ ಆರ್ಥಿಕ ಸಮಸ್ಯೆಗಳು ಒಂದೊಂದಾಗಿ ನಿವಾರಣೆಯಾದವು. ಹಣಕಾಸಿನಲ್ಲಿ ಸ್ವಲ್ಪ ಉಳಿತಾಯವಾದ ನಂತರ ನಾವು ಮೊದಲು ಒಂದು ಸಣ್ಣ ಅಂಗಡಿಯಲ್ಲಿ ವ್ಯಾಪಾರ ಆರಂಭಿಸಿದೆವು, ಅದು ನಮಗೆ ದೊಡ್ಡ ಪ್ರಮಾಣದಲ್ಲಿ ಯಶಸ್ಸನ್ನು ತಂದುಕೊಟ್ಟಿತು. ಅದರ ಬೆನ್ನಲ್ಲೆ ನಾವು ಮತ್ತೆ 3 ಹೊಸ ವ್ಯಾಪಾರಗಳನ್ನು ಪ್ರಾರಂಭಿಸಿದ್ದೇವೆ. ಇಂದು ಎಲ್ಲಾ ವ್ಯಾಪಾರಗಳಿಂದಲೂ ಉತ್ತಮ ಲಾಭ ಬರುತ್ತಿದೆ. ನಾವು ನಮ್ಮ ಜೀವನದಲ್ಲಿ ಎಂದೂ ನಾಲ್ಕು ಚಕ್ರದ ವಾಹನವನ್ನು ಹೊಂದಿರಲಿಲ್ಲ, ಆದರೆ ಇಂದು ನಾವು ಸ್ವಂತ ಕಾರು ಖರೀದಿಸಿದ್ದೇವೆ. ನನ್ನ ಸಾಮಾಜಿಕ ಕಾರ್ಯಗಳು ಇಂದು ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದವು ಮತ್ತು ನನಗೆ ಸಾಕಷ್ಟು ಪ್ರಶಸ್ತಿಗಳು ಮತ್ತು ಗೌರವ ಒಲಿದು ಬಂದಿವೆ. ನಮ್ಮ ವ್ಯಾಪಾರದಲ್ಲಿ ಬಂದ ಲಾಭದಿಂದ ನಾವು ಮನೆಯ ಖರ್ಚುಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದೇವೆ. ಮತ್ತು ಅದರಲ್ಲಿ ಉಳಿದ ಹಣವನ್ನು ಅಗತ್ಯವಿರುವ ಜನರಿಗೆ ಸಹಾಯ ಮಾಡುತ್ತೇವೆ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಕಾರ್ಯ ನನಗೆ ಬಹಳಷ್ಟು ತೃಪ್ತಿಯನ್ನು ತಂದಿದೆ. ಒಂದು ಕಾಲದಲ್ಲಿ ನನ್ನ ವೈಯಕ್ತಿಕ ಜೀವನವನ್ನು ನಡೆಸಲು ಹೆಣಗಾಡುತ್ತಿದ್ದ ನಾನು, ಇಂದು ನನ್ನಂತೆ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಹಂತವನ್ನು ತಲುಪಿದ್ದೇನೆ. ಇಷ್ಟೆಲ್ಲ ಸಾಧ್ಯವಾಗಿರುವುದು ಮಾನವ ಗುರುವಿನ ದಿವ್ಯ ಜ್ಞಾನದ ಮಾರ್ಗದರ್ಶನದಿಂದ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

ತಮ್ಮ ದಿವ್ಯ ಜ್ಞಾನದ ಮೂಲಕ ಮಾನವ ಗುರು ಅವರು ಈ ಜಗತ್ತಿನಲ್ಲಿರುವ ಪ್ರತಿಯೊಂದು ಕುಟುಂಬವನ್ನು ವಿಶ್ವ ಶಕ್ತಿಯೊಂದಿಗೆ ಸಂಪರ್ಕ ಹೊಂದುವಂತೆ ಮಾಡಬಹುದು. ಯಾವುದೇ ವ್ಯಕ್ತಿಯು ವಿಶ್ವ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಿದ್ಧೆಯಾದರೆ ಅವರು ಜೀವನದಲ್ಲಿ ಬಯಸಿದ್ದೆಲ್ಲವನ್ನು ಪಡೆಯುತ್ತಾ ಹೋಗುತ್ತಾರೆ. ಇದು ಮಾನವ ಗುರು ಅವರ ದಿವ್ಯ ಜ್ಞಾನದ ವಿಶಿಷ್ಟತೆಯಾಗಿದೆ.

ಮಾನವ ಗುರುವಿನ ದಿವ್ಯ ಜ್ಞಾನದ ಮಾರ್ಗದರ್ಶನ ಯಾವುದೇ ಧರ್ಮ ಅಥವಾ ಜಾತಿಯನ್ನು ಆಧರಿಸಿಲ್ಲ. ನಾನೊಬ್ಬ ಮುಸ್ಲಿಂ ಆಗಿ ಮಾನವ ಗುರೂಜಿಯವರ ಮಾರ್ಗದರ್ಶನವನ್ನು ಅನುಸರಿಸಿದ್ದೇನೆ. ”ಮಾನವ ಗುರುವಿನ ಮಾರ್ಗದರ್ಶನ” ಮಾನವ ಗುರು ಅವರ ದಿವ್ಯ ಜ್ಞಾನವಾಗಿದೆ ಎಂಬುದನ್ನು ನಾನು ನಿಮಗೆ ಭರವಸೆ ನೀಡಬಲ್ಲೆ, ಇದನ್ನು ಜಗತ್ತಿನಲ್ಲಿರುವ ಪ್ರತಿಯೊಂದು ಕುಟುಂಬವು ಅವರ ಧರ್ಮ, ಜಾತಿ, ಸ್ಥಾನಮಾನ ಇತ್ಯಾದಿಗಳನ್ನು ಲೆಕ್ಕಿಸದೆ ಅಳವಡಿಸಿಕೊಳ್ಳಬಹುದು. ನಾನು ಪ್ರತಿಯೊಂದು ಕುಟುಂಬವು ಮಾನವ ಗುರುವಿನ ದಿವ್ಯ ಜ್ಞಾನದ ಮಾರ್ಗದರ್ಶನವನ್ನು ಅಳವಡಿಸಿಕೊಂಡು ಆನಂದಮಯ ಜೀವನವನ್ನು ಸಂತಸದಿಂದ ಅನುಭವಿಸಿ ಎಂದು ಬಯಸುತ್ತೇನೆ. ನಮ್ಮ ಕಷ್ಟಕಾಲದಲ್ಲಿ ನಮಗೆ ಮಾರ್ಗದರ್ಶನ ನೀಡಿ, ಸರಿದಾರಿ ತೋರಿದ ಗುರೂಜಿಯವರಿಗೆ ಧನ್ಯವಾದಗಳು.

Facebook Twitter Instagram Linkedin Youtube